*ಭೀಮಾತೀರದ ಹಂತಕ ಧರ್ಮರಾಜ್ ನಕಲಿ ಎನ್ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ*
ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಒತ್ತಾಯ.
ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯ.
ಕಳೆದ 2017 ರ ಅಕ್ಟೋಬರ್ 30 ರಂದು ಘಟನೆ ನಡೆದಿದ್ದವು.
ನಂತರ ಇಡೀ ಪ್ರಕರಣವನ್ನು ಸಿಒಡಿ ತಂಡ ತನಿಖೆ ಮಾಡಿತ್ತು.
ಭೀಮಾತೀರದ ಮಹಾದೇವ ಭೈರಗೊಂಡ, ಚಡಚಣ ಠಾಣೆಯ ಸಿಪಿಐ ಎಂ ಬಿ ಅಸೋಡೆ, ಪಿಎಸೈ ಗೋಪಾಲ ಹಳ್ಳೂರ,
ಮೂವರು ಕಾನ್ಸಸ್ಟೇಬಲ್ ಸೇರಿ ಒಟ್ಟು 15 ಜನರ ಮೇಲೆ ಆರೋಪ ಕೇಳಿ ಬಂದಿತ್ತು.
15 ಜನ ಆರೋಪಿತರನ್ನು ಬಂಧಿಸಿ ಸಿಒಡಿ ವಿಚಾರಣೆ ನಡೆಸಿತ್ತು.
ಸದ್ಯ ಆರೋಪಿತರೆಲ್ಲಾ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗಿದ್ದಾರೆ.
ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ.
ವಿಚಾರಣೆ ಹಂತದಲ್ಲಿರುವಾಗಲೇ ಸಿಬಿಐ ತನಿಖೆಗೆ ವಿಮಲಾಬಾಯಿ ಚಡಚಣ ಆಗ್ರಹ.
ಸಿಒಡಿ ತನಿಖೆ ಸರಿಯಾಗಿ ನಡೆದಿಲ್ಲಾ ಎಂದು ಅಸಮಾಧಾನ.
ಪ್ರಕರಣದ ಸಾಕ್ಷಿಗಳಿಗೆ ಪ್ರಮುಖ ಆರೋಪಿತರು ಸಾಕ್ಷ್ಯ ನುಡಿಯದಂತೆ ಬೆದರಿಕೆ ಹಾಕುತ್ತಿದ್ದಾರೆ.
ನಮ್ಮ ಜೀವಕ್ಕೆ ಅಪಾಯವಾದರೆ ಆರೋಪಿಗಳೇ ಅದಕ್ಕೆ ಆರೋಪಿಗಳೆ ಕಾರಣ.
ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಚಡಚಣ ಸಹೋದರರ ತಾಯಿ ವಿಮಲಾಭಾಯಿ ಆಗ್ರಹ.
0 Comments: