ಚಡಚಣ ತಾಲ್ಲೂಕಿನ ಗೋಡಿಹಾಳ ಗ್ರಾಮದಲ್ಲಿ    25 ಕ್ವಿಂಟೋಲ್ ಗೋಧಿ ಧಾನ್ಯ ವಿತರಣೆ

ಚಡಚಣ ತಾಲ್ಲೂಕಿನ ಗೋಡಿಹಾಳ ಗ್ರಾಮದಲ್ಲಿ 25 ಕ್ವಿಂಟೋಲ್ ಗೋಧಿ ಧಾನ್ಯ ವಿತರಣೆ

ಚಡಚಣ: ತಾಲ್ಲೂಕಿನ ಗೋಡಿಹಾಳ ಗ್ರಾಮದಲ್ಲಿ 400 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ 25 ಕ್ವಿಂಟೋಲ್ ಕೋಹಿನೂರ ಗೋಧಿ ಧಾನ್ಯ ವಿತರಿಸಿದ ನಿವೃತ್ತ ಶಿಕ್ಷಕ ಜಿ.ಕೆ ಮಠ ಸ್ವಖರ್ಚಿನಲ್ಲಿ ಇಂದು ತಮ್ಮ ಸ್ವಗ್ರಾಮದ ಜನರಿಗೆ ಸಹಾಯ ಹಸ್ತ ನೀಡಿದ್ದಾರೆ...
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರ್ಗದ ಜನರಿಗೆ ದುಡಿಯಲು ಕೆಲಸವಿಲ್ಲದೆ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಯಾರು ಬಳಲಬಾರದೆಂದು ನಿವೃತ್ತ ಶಿಕ್ಷಕ ಜಿ.ಕೆ ಮಠ ಅವರು ಗೋಡಿಹಾಳ ಗ್ರಾಮದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡಿ ಮಾನವಿಯತೆಯ ಮೆರೆದಿದ್ದಾರೆ...
ಚಡಚಣ ತಹಶೀಲ್ದಾರ್ ಎನ್.ಬಿ ಗೆಜ್ಜೆ, ಪಿಎಸ್ಐ ಮಹಾದೇವ ಯಲಗಾರ, ಹಲಸಂಗಿ ಜಿ.ಪಂ ಸದಸ್ಯ ಶಿವಶರಣ ಭೈರಗೊಂಡ ಅವರ ಸಮ್ಮುಖದಲ್ಲಿ ಗ್ರಾಮದ ಬಡ ಜನರಿಗೆ ಗೋಧಿ ವಿತರಣೆ ಮಾಡಲಾಯಿತು...
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ವಿಠ್ಠಲ್ ವಡಗಾಂವ, ಶಿಕ್ಷಕ ವಿಠ್ಠಲ್ ಭೈರಗೊಂಡ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಖೇಡ, ಗ್ರಾ.ಪಂ ಸದಸ್ಯರಾದ ವಿಠ್ಠಲ್ ಕಟ್ಟಿಮನಿ, ಶರಣು ತೋಳನೂರ, ಸಿದ್ರಾಮ ಗೋರನಾಳ, ಮುಖಂಡರಾದ ಸತೀಶ ತೋಳನೂರ, ಲಕ್ಷ್ಮಣ ಬೊರಗಿ, ಸಿದ್ದಯ್ಯ ಮಠ, ಪ್ರಮೋದ ಮಠ
ಮತ್ತಿತರರು ಉಪಸ್ಥಿತರಿದ್ದರು...

0 Comments: